'ಜೆಡಿಎಸ್ ಜನರಲ್ಲಿ ಅಭಿವೃದ್ಧಿ ಕನಸುಗಳನ್ನು ಹುಟ್ಟುಹಾಕಿದ್ದ ಪಕ್ಷ. ನಾನೂ ಕೂಡ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷನಾಗಿದ್ದೆ. ಪ್ರಾಂತೀಯ ಪಕ್ಷವನ್ನಾಗಿ ಗಟ್ಟಿ ನೆಲದಲ್ಲಿ ಕಟ್ಟಬೇಕೆಂಬ ಆಸೆ ಇತ್ತು. ಆದರೆ, ಅದಕ್ಕೆ ಬೆಂಬಲ ಸಿಗಲೇ ಇಲ್ಲ. ಅದು ಈಗ ಜಸ್ಟ್ ಅಡ್ಜೆಸ್ಟ್ ಮೆಂಟ್ ಪಾರ್ಟಿಯಾಗಿ ಉಳಿದು ಹೋಗಿದೆ. ಶಕ್ತಿ, ಸತ್ವದ ಮೇಲೆ ಪಕ್ಷವಾಗಿ ಉಳಿಯುವಂತ ಲಕ್ಷಣಗಳು ಕಾಣುತ್ತಿಲ್ಲ. ದೇವೇಗೌಡರು ಇರುವವರೆಗೆ ಮಾತ್ರ ಜೆಡಿಎಸ್ ಉಳಿವು ಎಂಬ ಸಂದೇಶ ಜನರಿಗೆ ರವಾನೆಯಾಗುತ್ತಿದೆ. ರಾಜಕಾರಣದಲ್ಲಿ ನಿರೀಕ್ಷೆಗೂ ಮೀರಿದ ತೀರ್ಮಾನಗಳು ಅಗುತ್ತಿವೆ. ಜೆಡಿಎಸ್ ಪಕ್ಷದ ಕಥೆ ಹ್ಯಾಮ್ಲೆಟ್ ನಾಟಕದಂತಾಗಿದೆ. ಬಿಜೆಪಿಗೆ ಜೆಡಿಎಸ್ ಅನಿವಾರ್ಯ ಅಲ್ಲವೇ ಅಲ್ಲ. 2007ರಲ್ಲಿ ಕುಮಾರಸ್ವಾಮಿ ಬಿಜೆಪಿ ಜೊತೆ ಕೈಜೋಡಿಸಿದ್ದರು. ಅದು ಹುಡುಗ, ಹುಡುಗಿ ಓಡೋಗಿ ಮದುವೆ ಆಗ್ತಾರಲ್ಲಾ ಹಾಗೆ. ಬಿಜೆಪಿಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆ ಇಲ್ಲ' ಎಂದರು.