ಬೆಂಗಳೂರು: ಮಳೆ ನೀರಿನಲ್ಲಿ ಬಸ್ ಮುಳುಗಿ ಎಂಜಿನ್ ಸೀಜ್ ಆದರೆ ಚಾಲಕರೇ ಹೊಣೆ...
ಇಂತಹದೊಂದು ಸುತ್ತೋಲೆಯನ್ನು ಬಿಎಂಟಿಸಿ ಅಧಿಕಾರಿಗಳು ಹೊರಡಿಸಿ ದ್ದಾರೆ.
ಘಟಕ–15ರ(ಕೋರಮಂಗಲ) ಹಿರಿಯ ವ್ಯವಸ್ಥಾಪಕರು ಹೊರಡಿಸಿರುವ ಸುತ್ತೋಲೆಯನ್ನು ಡಿಪೊ ಮಾಹಿತಿ ಫಲಕದಲ್ಲಿ ಅಂಟಿಸಲಾಗಿದೆ.
‘ಬೆಂಗಳೂರಿನ ಎಲ್ಲೆಡೆ ಮಳೆ ಸುರಿಯುತ್ತಿದ್ದು, ನೀರು ನಿಂತಿರುವ ಕಡೆ ವಾಹನ ಚಾಲನೆ ಮಾಡಬಾರದು. ಒಂದು ವೇಳೆ ಚಾಲನೆ ಮಾಡಿ ಎಂಜಿನ್ ಸೀಜ್ ಆದರೆ ಚಾಲಕರನ್ನೇ ಹೊಣೆ ಮಾಡಲಾಗುವುದು. ಚಾಲನಾ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮವನ್ನೂ ಜರುಗಿಸಲಾ ಗುವುದು’ ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.
‘ಪ್ರಯಾಣಿಕರ ಸುರಕ್ಷತೆ ದೃಷ್ಟಿ ಯಿಂದ ಹೊರಡಿಸಿರುವ ಸುತ್ತೋಲೆ ಸರಿಯಾಗಿದೆ’ ಎಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಹೇಳಿದರು.