‘ಸಚಿವಾಲಯದ ಸೂಚನೆ ಮೇರೆಗೆ ರಾಜ್ಯದ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಯಶವಂತಪುರ, ತುಮಕೂರು, ಮಂಡ್ಯ, ಬಂಗಾರಪೇಟೆ, ಮೈಸೂರು, ಹಾಸನ, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ ಹಾಗೂ ತಮಿಳುನಾಡಿನ ಹೊಸೂರು ರೈಲು ನಿಲ್ದಾಣಗಳಲ್ಲಿ ದೇಶ ವಿಭಜನೆಯ ದಿನದ ಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯವು ದೇಶ ವಿಭಜನೆ ಸಂದರ್ಭದ ಚಿತ್ರಗಳನ್ನು ಈಗಾಗಲೇ ಕಳಿಸಿ ಕೊಟ್ಟಿದೆ’ ಎಂದು ಅನೀಶ್ ಹೆಗಡೆ ಹೇಳಿದರು.