ರಾಯಚೂರು: ‘ನಂದೀಶ್ ಅವರ ಸಾವಿನ ಬಳಿಕ ನೋಡಲು ಹೋಗಿದ್ದೆ. ಆಗ ಮಾರ್ಗದಲ್ಲಿ ಕಾರ್ಯಕರ್ತರು ಮಾತನಾಡಿದ್ದನ್ನು ಕೇಳಿಸಿಕೊಂಡು ₹ 70 ಲಕ್ಷ, ₹ 80 ಲಕ್ಷ ಕೊಟ್ಟು ಬಂದರೆ ಹೃದಯಾಘಾತ ಆಗದೇ ಇನ್ನೆನಾಗುತ್ತದೆ ಎಂದು ಹೇಳಿದ್ದೇನೆ‘ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ ಹೇಳಿದರು.
‘ಸಣ್ಣ ವಿಷಯಕ್ಕೆ ಆಯುಕ್ತರು ಅಮಾನತು ಮಾಡಿದ್ದು ತಪ್ಪು. ಮೃತರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಲು ಮುಖ್ಯಮಂತ್ರಿಗೆ ಕೋರಲಾಗಿದೆ’ ಎಂದರು.