ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆ ಹೆಸರಿನಲ್ಲಿ ₹ 250 ಕೋಟಿ ವಂಚನೆ?

ವಿಎಫ್‌ಎಸ್‌ಎಸ್‌ಎಲ್‌ ಕಂಪನಿ ವಿರುದ್ಧ ಎಫ್‌ಐಆರ್
Last Updated 3 ಜನವರಿ 2021, 20:12 IST
ಅಕ್ಷರ ಗಾತ್ರ

ಬೆಂಗಳೂರು: ಹೂಡಿಕೆ ಹೆಸರಿನಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ ಆರೋಪದಡಿ ವಿಶ್ವಪ್ರಿಯಾ ಫೈನಾನ್ಶಿಯಲ್ ಸರ್ವೀಸ್ ಸೆಕ್ಯುರಿಟಿಸ್ (ವಿಎಫ್‌ಎಸ್‌ಎಸ್‌ಎಲ್) ಕಂಪನಿ ವಿರುದ್ಧ ನಗರದ ಸಿದ್ದಾಪುರ ಹಾಗೂ ಗಿರಿನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು ಎನ್ನಲಾದ ಇಂದಿರಾ ಮುರುಳಿ, ರೇಖಾ ನಾರಾಯಣ, ಎಂ. ಶಾಂತಿ, ಪದ್ಮಿನಿ ಬಲರಾಮ್ ಎಂಬುವರು ಪ್ರತ್ಯೇಕವಾಗಿ ದೂರು ನೀಡಿದ್ದಾರೆ. ತಾವು ಹಾಗೂ ಇತರರು, ಕಂಪನಿಯಲ್ಲಿ ₹ 250 ಕೋಟಿಯಷ್ಟು ಹಣ ಹೂಡಿಕೆ ಮಾಡಿ
ರುವುದಾಗಿ ಹೇಳುತ್ತಿದ್ದಾರೆ. ತಮಗೆಲ್ಲ ವಂಚನೆಯಾಗಿರುವುದಾಗಿ ಆರೋಪಿಸುತ್ತಿದ್ದಾರೆ. ತನಿಖೆ ಮುಂದುವರಿದಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಕಂಪನಿ ವ್ಯವಸ್ಥಾಪಕ ನಿರ್ದೇಶಕ ಆರ್. ಸುಬ್ರಹ್ಮಣ್ಯನ್, ಆರ್. ನಾರಾಯಣ, ರಾಜ್ ರತ್ನಮ್, ಟಿ.ಎಸ್. ರಾಘವನ್, ಶ್ರೀಮತಿ, ಪಿ. ಸದಾನಂದ್ ಹಾಗೂ ರಾಜೇಂದ್ರಕುಮಾರ್ ಅವರನ್ನು ಪ್ರಕರಣದ ಆರೋಪಿಗಳಾಗಿ ಮಾಡಲಾಗಿದೆ. ಅವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಿ, ವಂಚನೆಯಾದ ಒಟ್ಟು ಹಣವೆಷ್ಟು ಎಂಬುದನ್ನು ಪತ್ತೆ ಮಾಡಬೇಕು’ ಎಂದೂ ತಿಳಿಸಿದರು.

‘ಕಂಪನಿಯ ಮುಖ್ಯ ಕಚೇರಿ ಚೆನ್ನೈನಲ್ಲಿದೆ. ಬೆಂಗಳೂರಿನ ಜಯನಗರ ಹಾಗೂ ಎಂ.ಜಿ.ರಸ್ತೆಯಲ್ಲಿ 2016ರಿಂದ ಎರಡು ಶಾಖಾ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಉಳಿತಾಯ ಖಾತೆ ತೆರೆದು ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಬಡ್ಡಿ ನೀಡುವುದಾಗಿ ಕಂಪನಿ ಹೇಳುತ್ತಿತ್ತು. ಅದನ್ನು ನಂಬಿ, ಸಾವಿರಾರು ಮಂದಿ ಹಣ ಹೂಡಿಕೆ ಮಾಡಿರುವ ಮಾಹಿತಿ ಇದೆ.’

‘ಕಂಪನಿ ಅಧಿಕಾರಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು. ವಂಚನೆಗೀಡಾವರು, ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ದೂರು ನೀಡಬಹುದು’ ಎಂದು ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT