ಈ ಕುರಿತಂತೆ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅಸಲು ದಾವೆಯನ್ನು ನಗರದ 74ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಗಂಗಣ್ಣವರ ಬುಧವಾರವಷ್ಟೇ (ಫೆ.22) ವಿಚಾರಣೆ ನಡೆಸಿ, ಮಧ್ಯಂತರ ಆದೇಶವನ್ನು ಗುರುವಾರಕ್ಕೆ (ಫೆ.23) ಕಾಯ್ದಿರಿಸಿದ್ದರು. ಗುರುವಾರ ಆದೇಶ ಪ್ರಕಟಿಸಲಾಗಿದ್ದು, ರೂಪಾ ಸೇರಿದಂತೆ ಪ್ರತಿವಾದಿಗಳಾದ ಮಾಧ್ಯಮ ಸಂಸ್ಥೆಗಳಿಗೂ ಪ್ರತಿಬಂಧಕ ಆದೇಶ ಹೊರಡಿಸಲಾಗಿದೆ. ರೋಹಿಣಿ ಅವರ ವಿರುದ್ಧ ಯಾವುದೇ ಮಾನಹಾನಿಯಾಗುವಂತಹ ಸುದ್ದಿ ಪ್ರಸಾರ ಮಾಡದಂತೆ ಮತ್ತು ಚಿತ್ರ ಅಥವಾ ದೃಶ್ಯಗಳನ್ನು ಬಿತ್ತರಿಸದಂತೆ ಪ್ರತಿಬಂಧಿಸಲಾಗಿದೆ.