ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ದತ್ತಾಂಶ ನಗದೀಕರಣ: ಟೆಂಡರ್ ಹಿಂಪಡೆದ ಐಆರ್‌ಸಿಟಿಸಿ

Last Updated 26 ಆಗಸ್ಟ್ 2022, 16:24 IST
ಅಕ್ಷರ ಗಾತ್ರ

ನವದೆಹಲಿ: ಗ್ರಾಹಕರ ದತ್ತಾಂಶದ ನಗದೀಕರಣಕ್ಕಾಗಿ ಕರೆದಿದ್ದ ಟೆಂಡರ್‌ ಅನ್ನು ಭಾರತೀಯ ರೈಲ್ವೆ ಕೇಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಹಿಂಪಡೆದಿದೆ.

ಗ್ರಾಹಕರ ದತ್ತಾಂಶದ ಸುರಕ್ಷತೆಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ, ಐಆರ್‌ಸಿಟಿಸಿ ಈ ಕ್ರಮ ಕೈಗೊಂಡಿದೆ.

ಕೇಂದ್ರ ಸರ್ಕಾರವು ‘ವೈಯಕ್ತಿಕ ಮಾಹಿತಿ ಸಂರಕ್ಷಣಾ ಮಸೂದೆ–2018’ ಅನ್ನು ಹಿಂಪಡೆದಿದೆ. ಈ ಕಾರಣಕ್ಕೆ ಗ್ರಾಹಕರ ದತ್ತಾಂಶ ನಗದೀಕರಣಕ್ಕಾಗಿ ಕರೆದಿದ್ದ ಟೆಂಡರನ್ನು ಹಿಂಪಡೆಯಲಾಗಿದೆ ಎಂದು ಐಆರ್‌ಸಿಟಿಸಿಯು ಷೇರು ವಿನಿಮಯ ಕೇಂದ್ರಕ್ಕೆ ತಿಳಿಸಿದೆ.

ಪ್ರಯಾಣಿಕರು, ಪ್ರಯಾಣದ ದರ್ಜೆ, ಪಾವತಿ ವಿಧಾನ, ಸರಕು ಸೇವೆಗಳು ಮತ್ತು ವ್ಯಾಪಾರ ಮಾದರಿ ಗುರುತಿಸುವಿಕೆ,ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ, ಲಿಂಗ, ವಿಳಾಸ, ಇಮೇಲ್-ಐಡಿ, ಪಾಸ್‌ವರ್ಡ್‌ ಸೇರಿದಂತೆ ಗ್ರಾಹಕರ ದತ್ತಾಂಶದ ನಗದೀಕರಣಕ್ಕೆ ಸಲಹೆ ನೀಡಲು ಕನ್ಸಲ್ಟಂಟ್‌ ನೇಮಕಕ್ಕಾಗಿ ಜುಲೈ 29 ರಂದು ಐಆರ್‌ಸಿಟಿಸಿ ಇ-ಟೆಂಡರ್ ಕರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT