ಎಚ್.ಡಿ ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆ ವ್ಯಾಪ್ತಿಯ ಮೂರು ವಿಧಾನಸಭಾಕ್ಷೇತ್ರಗಳಲ್ಲಿಈಗಾಗಲೇ ಸ್ಫರ್ಧೆ ಮಾಡಿದ್ದಾರೆ. ರಾಮನಗರ, ಚನ್ನಪಟ್ಟಣದಲ್ಲಿ ಅವರು ಗೆಲುವು ಕಂಡಿದ್ದರೆ, 1994ರಲ್ಲಿಸಾತನೂರಿನಲ್ಲಿ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಅವರು, ಎರಡರಲ್ಲೂ ಗೆದ್ದಿದ್ದರು. ಅಂತಿಮವಾಗಿ ರಾಮನಗರ ತೊರೆದು, ಚನ್ನಪಟ್ಟಣವನ್ನು ಅವರು ಉಳಿಸಿಕೊಂಡಿದ್ದರು.