‘ಇಸ್ಕಾನ್ ಸಂಸ್ಥೆಯು ಮಹದೇವಪುರ ಗ್ರಾಮದ ಸರ್ವೇ 411ರಲ್ಲಿ ಒಟ್ಟು 77 ಎಕರೆ ಜಮೀನನ್ನು ಖರೀದಿಸಿದೆ. ಇದೇ ಸರ್ವೇ ನಂಬರ್ನಲ್ಲಿರುವ 33.17 ಎಕರೆ ಸರ್ಕಾರಿ ಜಮೀನನ್ನೂ ಇಸ್ಕಾನ್ ಒತ್ತುವರಿ ಮಾಡಿದೆ. ಒತ್ತುವರಿಯನ್ನು ತೆರವುಗೊಳಿಸುವಂತೆ ಈಗಾಗಲೇ ಸ್ಥಳೀಯಾಡಳಿತ ನೋಟಿಸ್ ನೀಡಿದೆ. ಭೂ ಕಬಳಿಕೆ ಕುರಿತ ವಿಶೇಷ ನ್ಯಾಯಾಲಯವು ಕೂಡ ಈ ಜಾಗದಲ್ಲಿ ಇಸ್ಕಾನ್ ಅಳವಡಿಸಿರುವ ತಂತಿಬೇಲಿಯನ್ನು ತೆರವುಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.