'ನಿಲ್ದಾಣಕ್ಕೆ ಹೊಂದಿಕೊಂಡಿರುವ ಓಕಳಿಪುರಕ್ಕೆ ಊಟ ಹಾಗೂ ತಿಂಡಿಗೆಂದು ಹೋಗಿ ಬರುತ್ತಿದ್ದ ತಾಲಿಬ್, ಸ್ಥಳೀಯರನ್ನು ಪರಿಚಯ ಮಾಡಿಕೊಂಡಿದ್ದ. ಅನಾಥನೆಂದು ಹೇಳಿದ್ದ ಈತ, ಓಕಳಿಪುರದ ಮಸೀದಿಯೊಂದರಲ್ಲಿ ಅನ್ವರ್ ಪಾಷಾ ಎಂಬಾತನ ಮೂಲಕ ಆಶ್ರಯ ಪಡೆದಿದ್ದ. ಆಟೊ ಚಾಲಕನಾಗಿ ಬದಲಾಗಿದ್ದ ತಾಲಿಬ್, ಓಕಳಿಪುರದಲ್ಲೇ ಬಾಡಿಗೆ ಮನೆ ಮಾಡಿದ್ದ. ಜಮ್ಮುವಿನಲ್ಲಿದ್ದ ಪತ್ನಿ ಹಾಗೂ ಮೂವರು ಮಕ್ಕಳನ್ನು ಬೆಂಗಳೂರಿಗೆ ಕರೆತಂದು ವಾಸವಿದ್ದ. ಎರಡು ವರ್ಷಗಳಿಂದ ಸ್ಥಳೀಯರ ಜೊತೆ ಒಡನಾಟ ಹೊಂದಿ, ಎಲ್ಲರ ನಂಬಿಕೆ ಗಳಿಸಿದ್ದ.' ಎಂದು ಅವರು ಹೇಳಿದ್ದಾರೆ.