ಇದನ್ನು ಆಲಿಸಿದ ವಿಧಾನಸಭಾ ಸದಸ್ಯರು ಒಂದು ಕ್ಷಣ ಗಾಬರಿಗೊಂಡು ಪರಸ್ಪರ ಮುಖಮುಖ ನೋಡಿಕೊಂಡರು. ಇದಕ್ಕೆ ಸಾವಧಾನವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ಮೊದಲ ಬಾರಿಗೆ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿದ್ದು ನಿಜ. ಇನ್ನೊಮ್ಮೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದಿತು. ವ್ಯತಿರಿಕ್ತ ವರದಿಗಳ ಬಗ್ಗೆ ಮಣಿಪಾಲ ಆಸ್ಪತ್ರೆಯ ವೈರಾಣು ತಜ್ಞರ ಬಳಿ ಹೇಳಿದಾಗ ಮತ್ತೊಮ್ಮೆ ಪರೀಕ್ಷೆ ಮಾಡಿಸಲಾಯಿತು. ಆಗಲೂ ನೆಗೆಟಿವ್ ಅಂತ ಬಂದಿತು. ಮೊದಲ ವರದಿಯಲ್ಲಿ ಲೋಪವಿದೆ ಎಂದು ಹೇಳಿದರು. ಸದನಕ್ಕೆ ಹಾಜರಾಗಬಹುದೇ ಎಂದು ಕೇಳಿದಾಗ, ಖಂಡಿತಾ ಹಾಜರಾಗಬಹುದು ಎಂದು ಪ್ರಮಾಣ ಪತ್ರ ನೀಡಿದರು. ಅದನ್ನು ಸಭಾಧ್ಯಕ್ಷರ ಗಮನಕ್ಕೆ ತಂದಿದ್ದೇನೆ’ ಎಂದರು.