ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಪಕ್ಷದ ಲಾಭ ಪಡೆದುಕೊಂಡವರ‍್ಯಾರೂ ನಮ್ಮೊಂದಿಗಿಲ್ಲ: ದೇವೇಗೌಡ

Last Updated 24 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಸಿಂದಗಿ: ‘ನಮ್ಮ ಪಕ್ಷದ ಲಾಭ ಪಡೆದುಕೊಂಡವರು ಯಾರೂ ಜೊತೆಯಿಲ್ಲ. ಹಣ, ಅಧಿಕಾರದ ಬೆನ್ನು ಹತ್ತಿ ಹೋಗಿದ್ದಾರೆ. ಈಗಿನ ರಾಜಕಾರಣ ತತ್ವ ರಾಜಕಾರಣದಿಂದ ವಿಮುಖವಾಗಿದೆ’ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ವಿಷಾದಿಸಿದರು.

ಇಲ್ಲಿಯ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ದಿವಂಗತ ಎಂ.ಸಿ.ಮನಗೂಳಿ ಅವರನ್ನು ಎರಡು ಸಲ ಸಚಿವನನ್ನಾಗಿ ಮಾಡಿದ್ದೆ. ಆದರೆ ಅವರ ಮಗ ಕಾಂಗ್ರೆಸ್‌ಗೆ ಹೋದ. ಈ ಭಾಗದ ಸಂಸದ ರಮೇಶ ಜಿಗಜಿಣಗಿ ನಾನೇ ಬೆಳೆಸಿದ ವ್ಯಕ್ತಿ. ಆತ ಪಾರ್ಲಿಮೆಂಟ್ ಏರಿದ’ ಎಂದು ಅವರು ನೆನಪಿಸಿಕೊಂಡರು.

‘ಬರಡು ಭೂಮಿಯಾಗಿದ್ದ ಈ ನಾಡಿಗೆ ನೀರಾವರಿ ಯೋಜನೆ ಜಾರಿಗೆ ತಂದ ಕಾರಣ ರೈತರು ನನ್ನ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಗೋಲಗೇರಿಯಲ್ಲಿ ನನ್ನ ಮೂರ್ತಿ ಮಾಡಿ ಎಂದು ರೈತರಿಗೆ ನಾನೇನು ಅರ್ಜಿ ಹಾಕಿದ್ನಾ? ಇಲ್ಲವಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT