ಸರಣಿ ಟ್ವೀಟ್ಗಳ ಮೂಲಕ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ‘ನೀವು ಬಿಜೆಪಿಗಷ್ಟೇ ಮುಖ್ಯಮಂತ್ರಿಯಲ್ಲ. ಜನತಾ ಪರಿವಾರಿ ಆಗಿದ್ದವರು ಇಂದು ಸಂಘ ಪರಿವಾರಿಯಾಗಿ ರೂಪಾಂತರಗೊಂಡಿದ್ದೀರಿ. ನಿಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಎಂ.ಎನ್.ರಾಯ್ ಅವರ ಅನುಯಾಯಿ. ಅವರ ಪುತ್ರರಾಗಿ ಸಂವಿಧಾನ ವಿರೋಧಿ ಮಾದರಿ ಮಾತನಾಡುತ್ತಿರುವುದು ಅತೀವ ಆಘಾತ ಉಂಟು ಮಾಡಿದೆ. ನಿಮ್ಮ ನಡೆ ಸಹಜ ನ್ಯಾಯ, ಸಂವಿಧಾನಕ್ಕೆ ವಿರುದ್ಧ’ ಎಂದು ಟೀಕಿಸಿದ್ದಾರೆ.