ಈ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡರು, ‘ಒಬ್ಬ ಸಮರ್ಥ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹಿರಿಯ ವ್ಯಕ್ತಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇಬ್ರಾಹಿಂ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಾರೆ. ಇದರ ನಡುವೆ ದೇವೇಗೌಡರ ಕುಟುಂಬದವರೇ ಎಲ್ಲ ಇದ್ದಾರೆ, ಇದು ಒಕ್ಕಲಿಗರ ಪಕ್ಷ ಎಂದೆಲ್ಲ ಅಪಪ್ರಚಾರ ಮಾಡಬಹುದು. ಆದರೆ, ನಾನು ಎಲ್ಲ ವರ್ಗದವರನ್ನು ಗುರುತಿಸಿ ಮಂತ್ರಿಮಂಡಲ ಮಾಡಿದ್ದೆ. ಮುಸ್ಲಿಮರಿಗೆ ಮೀಸಲಾತಿ ತಂದಿದ್ದು ನಾನೇ’ ಎಂದರು.