ಯೋಜನೆ ಅಂಗವಾಗಿ ಮೊದಲ ಹಂತದಲ್ಲಿ ತಮಿಳಿನ ಮೂರು ಕೃತಿಗಳು ಪ್ರಕಟವಾಗುತ್ತಿವೆ.ಗಾಂಧೀಜಿ ಪ್ರಭಾವಕ್ಕೆ ಒಳಗಾಗಿ ತಮಿಳುನಾಡಿನ ಗ್ರಾಮಗಳಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿಮತ್ತು ಸಮಾಜ ಸುಧಾರಣೆಯಲ್ಲಿ ನಿಸ್ವಾರ್ಥದಿಂದ ತೊಡಗಿಸಿಕೊಂಡು, ತಮ್ಮಬಾಳನ್ನೆ ಬದಲಿಸಿಕೊಂಡ 15 ಮಹನೀಯರ ಕುರಿತ ಪ್ರಬಂಧಗಳ ಸಂಕಲನ ‘ಬಾಪೂಹೆಜ್ಜೆಗಳಲ್ಲಿ’ (ಲೇ: ಪಾವಣ್ಣನ್, ಪಲ್ಲವ ಪ್ರಕಾಶನ, ಹೊಸಪೇಟೆ). ಇದರಲ್ಲಿ ಪ್ರಸಿದ್ಧರಾದರಾಜಾಜಿ, ಕೆ.ಸ್ವಾಮಿನಾಥನ್, ಜೆ.ಸಿ. ಕುಮರಪ್ಪ, ಲಕ್ಷ್ಮಣ ಅಯ್ಯರ್ ಅಂಥವರಲ್ಲದೆ, ಅಜ್ಞಾತರಾಗಿಸೇವೆ ಸಲ್ಲಿಸಿದ ಅಂಬುಜಮ್ಮಾಳ್, ಗೋದೈ ಅಮ್ಮಾಳ್, ಶ್ರೀಲಂಕಾದ ರಾಜಗೋಪಾಲಮುಂತಾದವರ ಕುರಿತ ಪರಿಚಯವಿದೆ.