‘ರಾಜಕಾರಣಿಗಳು, ಶಾಸಕರ ಎಂಜಲು ತಿನ್ನುವುದನ್ನು ಪೊಲೀಸರು ಬಿಡಬೇಕು. ಕನ್ನಡ ನೆಲ, ಬಾವುಟ ಕಾಯಬೇಕು. ಪೊಲೀಸರು ಕತ್ತೆ, ದನ ಕಾಯುವುದಕ್ಕೂ ಲಾಯಕ್ಕಿಲ್ಲ. ಕನ್ನಡ ಹೋರಾಟಗಾರರ ಮೇಲೆ ದರ್ಪ ತೋರಿಸುವುದನ್ನು ನಿಲ್ಲಿಸಬೇಕು. ರಕ್ಷಣೆ ಕೊಡುವುದು ಬಿಟ್ಟು ಕನ್ನಡಿಗರಿಗೆ ದ್ರೋಹ ಬಗೆಯುತ್ತಿರುವ ನಿಮಗೆ ನಾಚಿಕೆಯಾಗಬೇಕು. ಬಾವುಟ ತೆರವುಗೊಳಿಸಿದರೆ ರಾಜ್ಯದಾದ್ಯಂತ ಬೆಂಕಿ ಹೊತ್ತಿಕೊಳ್ಳುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.