‘ಮಧೂರು, ಮಲ್ಲ, ಪಿಳಿಕುಂಜೆ, ಹೊಸದುರ್ಗ, ಕುಂಬಳೆ ಸೇರಿದಂತೆ ಅಲ್ಲಿನ ವಿವಿಧ ಗ್ರಾಮಗಳಿಗಿರುವ ಕನ್ನಡದ ಹೆಸರುಗಳು ಅತ್ಯಂತ ಅರ್ಥಪೂರ್ಣವಾಗಿವೆ. ಹೀಗಿರುವಾಗ ಕನ್ನಡದ ಅಸ್ಮಿತೆಗೆ ಧಕ್ಕೆ ತರುವ ಕೆಲಸವನ್ನು ಮಾಡಬಾರದು. ಈ ಪ್ರಕ್ರಿಯೆಯಲ್ಲಿ ಕೇರಳ ಸರ್ಕಾರ ಮುಂದುವರೆದರೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡು ಹೊರನಾಡಿನ ವಿವಿಧ ಸಂಘಟನೆಗಳೊಂದಿಗೆ ಹೋರಾಟ ನಡೆಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.