ಗಡಿ ಗಲಾಟೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು,‘ಶೀಘ್ರದಲ್ಲಿಯೇ ಬೆಳಗಾವಿಗೆ ಭೇಟಿ ನೀಡಿ, ಹೋರಾಟಗಾರರ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ಇದೆ ಎನ್ನುವುದನ್ನು ತಿಳಿಸಲಾಗುವುದು. ಗಡಿ ವಿವಾದವು ಮುಗಿದು ಹೋದ ಅಧ್ಯಾಯವಾಗಿದ್ದು, ಇದನ್ನು ಪದೇ ಪದೇ ಕೆದಕುವುದರಿಂದ ಎರಡೂ ರಾಜ್ಯಗಳ ಶಾಂತಿ ಕದಡುತ್ತದೆ. ಶಾಂತಿ ಪ್ರಿಯರಾದ ಕನ್ನಡಿಗರು ತಾವಾಗಿಯೇ ಎಂದಿಗೂ ಜಗಳಕ್ಕೆ ಹೋಗುವವರಲ್ಲ. ಆದರೆ, ತಮ್ಮ ಮೇಲೆ ಆಕ್ರಮಣ ನಡೆದರೆ ರಕ್ಷಿಸಿ ಕೊಳ್ಳುವ, ಸಮರ್ಥಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ’ ಎಂದು ಹೇಳಿದ್ದಾರೆ.