‘ತುಳುನಾಡಿನಲ್ಲಿ ದೈವವೇ ದೇವರು. ಸತ್ಯ ಮಾರ್ಗದಲ್ಲಿ ನಡೆಯಬೇಕು ಎಂಬುದು ಈ ಆರಾಧನೆಯ ಹಿಂದಿನ ಆಶಯ. ಪ್ರಕೃತಿ ನಾಶವಾದಾಗ, ಅಂತರ್ಜಲ ಬತ್ತಿದಾಗ, ಗೋ ಸಂತತಿ ಕಡಿಮೆಯಾದಾಗ, ಸತ್ಯ ಸತ್ತು, ಸುಳ್ಳೇ ವಿಜೃಂಭಿಸಿದಾಗ ಕೈಹಿಡಿಯಲು ದೈವ ಬೇಕು ಎಂಬುದು ನಂಬಿಕೆ. ಹೀಗಿರುವಾಗ ವೃಥಾ ವಿವಾದಗಳನ್ನು ಹುಟ್ಟುಕಾಕುವುದು ಸರಿಯಲ್ಲ’ ಎಂದು ಕತ್ತಲ್ಸಾರ್ ಹೇಳಿದರು.