ಸಿದ್ದರಾಮಯ್ಯ ಮಾತನಾಡಿ, ‘ಮೊದಲ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಈ ಯಾತ್ರೆ ಆರಂಭಿಸುತ್ತಿದ್ದು, ನಂತರ ಶಿವಕುಮಾರ್ ಮತ್ತು ನನ್ನ ನೇತೃತ್ವದಲ್ಲಿ ಪಕ್ಷದ ಹಿರಿಯ ನಾಯಕರು ಎರಡು ಗುಂಪುಗಳಾಗಿ ಪ್ರವಾಸ ಮಾಡುತ್ತೇವೆ. ಮೊದಲು ನಮ್ಮ ತಂಡ ಉತ್ತರ ಕರ್ನಾಟಕ ಭಾಗದಲ್ಲಿ, ಶಿವಕುಮಾರ್ ಅವರ ತಂಡ ದಕ್ಷಿಣ ಕರ್ನಾಟಕದಲ್ಲಿ ಪ್ರವಾಸ ಮಾಡಿದರೆ, ನಂತರ ಅವರು ಉತ್ತರ ಕರ್ನಾಟಕ, ನಾನು ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡುತ್ತೇವೆ’ ಎಂದರು.