ಚನ್ನಪಟ್ಟಣದಲ್ಲಿ ಶನಿವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಇದೇ 31ರಂದು ನಮ್ಮ ರಾಜ್ಯದಲ್ಲಿ ಬಂದ್ಗೆ ಕರೆ ನೀಡಲಾಗಿದೆ. ಆದರೆ ಇದರಿಂದ ಮಹಾರಾಷ್ಟ್ರಕ್ಕೆ ಏನು ತೊಂದರೆ ಆಗದು. ಬಂದ್ ಮಾಡುವುದರಿಂದ ನಮ್ಮಲ್ಲಿನ ಸಣ್ಣ ವ್ಯಾಪಾರಿಗಳಿಗೆ, ಕೂಲಿ ಕಾರ್ಮಿಕರಿಗೆ ಆಗುವ ತೊಂದರೆ ಕುರಿತು ಕರೆ ನೀಡಿದವರು ಯೋಚಿಸಬೇಕು. ಹೋರಾಟಗಾರರು ಇದರ ಬದಲು ಸರ್ಕಾರದ ಮೇಲೆ ಬೇರೆ ಮಾರ್ಗಗಳ ಮೂಲಕ ಒತ್ತಡ ಹೇರುವ ಪ್ರಯತ್ನ ಮಾಡಬೇಕು’ ಎಂದು ಸಲಹೆ ನೀಡಿದರು.