ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಪ್ರಿಯಾಂಕ್ ಖರ್ಗೆ ಅವರೇ ‘ಇಂಡಿಯಾ ವಿತ್ ರಾಹುಲ್ಗಾಂಧಿ’ ಎಂದು ಹೇಳುವ ಮುನ್ನ ನಿಮ್ಮ ತಂದೆಯನ್ನು ಇ.ಡಿ ತನಿಖೆ ಮಾಡಿದಾಗ ನಿಮ್ಮ ಕುಟುಂಬದ ಪರ ಯಾರೂ ನಿಲ್ಲಲಿಲ್ಲವೇಕೆ ಎಂಬುದನ್ನು ಯೋಚಿಸಿದ್ದೀರಾ? ನಿಮ್ಮ ತಂದೆಯ ಪರವಾಗಿ ಏಕೆ ಧ್ವನಿ ಎತ್ತಲಿಲ್ಲ. ಜನ್ಮದಾತನಿಗಿಂತಲೂ ನಿಮಗೆ ನಕಲಿ ಗಾಂಧಿಗಳೇ ಹೆಚ್ಚಾದರೇ’ ಎಂದೂ ಪ್ರಶ್ನಿಸಿದೆ.