‘ಹಿಂಡಲಗಾ ಗ್ರಾಮದಲ್ಲಿ ರಸ್ತೆ, ಚರಂಡಿ ಮೊದಲಾದ ಕೆಲಸ ಮಾಡುವಂತೆ ಸಂತೋಷ್ ಹಾಗೂ ಗ್ರಾ.ಪಂ. ಅಧ್ಯಕ್ಷ ನಾಗೇಶ ಇಬ್ಬರೂ ಸೇರಿ ನಮಗೆ ತಿಳಿಸಿದ್ದರು. ಒಟ್ಟು 12 ಮಂದಿ ವಿವಿಧೆಡೆ ಕೆಲಸ ಮಾಡಿದ್ದೇವೆ. ಕಾರ್ಯಾದೇಶದ ಪ್ರತಿ ಕೇಳಿದಾಗ, ನನ್ನ ಬಳಿ ಇದೆ, ನೀವೇನೂ ಕಾಳಜಿ ಮಾಡಬೇಡಿ ಕಾಮಗಾರಿ ನಡೆಸಿ ಎಂದು ಸಂತೋಷ್ ತಿಳಿಸಿದ್ದರು. ಅವರ ಮಾತನ್ನು ನಂಬಿ ನಾವು ಕೆಲಸ ನಿರ್ವಹಿಸಿದ್ದೇವೆ’ ಎಂದು ಉಪ ಗುತ್ತಿಗೆ ಪಡೆದಿದ್ದ ರಾಜು ಜಾಧವ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.