ಕಾರ್ಖೀವ್ ಮತ್ತು ಕೀವ್ ನಗರಗಳಲ್ಲೇ 3500ಕ್ಕೂ ಹೆಚ್ಚು ಭಾರತೀಯರಿದ್ದು, ಕರ್ನಾಟಕ ಮೂಲದವರ ಸಂಖ್ಯೆಯೂ ಅಧಿಕವಾಗಿದೆ. ಪೋಲಂಡ್, ಹಂಗರಿ, ಸ್ಲೋವಾಕಿಯಾ ಮತ್ತು ರೋಮೆನಿಯಾ ಗಡಿಗಳ ಮೂಲಕ ಸ್ವದೇಶಕ್ಕೆ ತೆರಳುವಂತೆ ಇಲ್ಲಿನ ಸರ್ಕಾರ ಹಾಗೂ ಭಾರತ ಸರ್ಕಾರಗಳು ಹೇಳುತ್ತಿವೆ. ಆದರೆ, ಆ ದೇಶಗಳ ಗಡಿ ತಲುಪಲು ಕನಿಷ್ಠ ಸಾವಿರದಿಂದ ಸಾವಿರದ ಐನೂರು ಕಿಲೋ ಮೀಟರ್ ರಸ್ತೆ ಪ್ರಯಾಣ ಮಾಡಬೇಕಿದೆ. ಅಷ್ಟು ದೂರ ಸಾಗಲು ಸಾರಿಗೆ ಸೌಲಭ್ಯವೂ ಇಲ್ಲ. ಮಾರ್ಗ ಮಧ್ಯೆ ರಕ್ಷಣೆಯೂ ಇಲ್ಲ. ಕೂಡಲೇ ಸರ್ಕಾರ ಗಮನ ಹರಿಸುವ ಮೂಲಕ ನಮ್ಮನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.