‘ಕೋವಿಡ್ ನಂತರ ರಾಜ್ಯ ಸಾಕಷ್ಟು ವೇಗದಲ್ಲಿ ಚೇತರಿಸಿಕೊಂಡಿದೆ. ಪರಿಣಾಮವಾಗಿ ಆರ್ಥಿಕ ಸ್ಥಿತಿ ಸುಧಾರಿಸಿದೆ. ಉತ್ಪಾದನಾ ಚಟುವಟಿಕೆ ಹೆಚ್ಚಿದೆ. ಅಗತ್ಯವಾದ ಕಚ್ಚಾವಸ್ತುಗಳು, ಕಾರ್ಮಿಕರ ಬಳಕೆಯೂ ಹೆಚ್ಚಾಗಿದೆ. ವಿಮಾನಯಾನ, ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಸಾಧನೆ ಆಗಿದೆ. ತಲಾವಾರು ಆದಾಯ ಹೆಚ್ಚಳವನ್ನೂ ಗಮನಿಸಬೇಕು’ ಎಂದರು.