ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮತ್ತು ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರ ಖಾತೆಗಳು ಬದಲಾಗಬಹುದು ಮತ್ತು ಗಣಿ ಸಚಿವ ಹಾಲಪ್ಪ ಆಚಾರ್ ಅವರನ್ನು ಕೈಬಿಡಲಾಗುತ್ತದೆ ಎಂಬ ಚರ್ಚೆ ಪಕ್ಷದ ವಲಯದಲ್ಲಿ ನಡೆದಿತ್ತು. ಆದರೆ, ಆರ್ಎಸ್ಎಸ್ ಮೂಲದ ಯಾವುದೇ ಸಚಿವರ ಖಾತೆಗಳು ಬದಲಾಗುವುದಿಲ್ಲ ಮತ್ತು ಕೈಬಿಡುವುದೂ ಇಲ್ಲ. ಇದಕ್ಕೆ ಆರ್ಎಸ್ಎಸ್ ಒಪ್ಪಿಯೂ ಇಲ್ಲ ಎಂದು ಹೇಳಲಾಗಿದೆ.