‘ಕಾನೂನು ಕಾಲೇಜಿನಲ್ಲಿ ಓದುತ್ತಿರುವಾಗ ಪ್ರಾಧ್ಯಾಪಕ ಪ್ರೊ.ನಂಜುಂಡಸ್ವಾಮಿ ನೀಡಿದ ಪ್ರೇರಣೆಯಿಂದ ಅನೇಕ ಹೋರಾಟಗಳಲ್ಲಿ ತೊಡಗಿ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪೊಲೀಸ್ ಠಾಣೆಗೂ ಹೋಗಬೇಕಾಯಿತು. ಈ ಮೊದಲು ಜನತಾ ಪರಿವಾರದಲ್ಲಿದ್ದ ನನಗೆ, ರಾಜಕೀಯದಲ್ಲಿ ನಿರೀಕ್ಷೆಗೂ ಮೀರಿ ಅವಕಾಶಗಳು ಸಿಕ್ಕಿತು. ಪ್ರಶಸ್ತಿ ಮೊತ್ತವನ್ನು ಗಾಂಧಿ ಭವನಕ್ಕೆ ನೀಡುತ್ತೇನೆ’ ಎಂದು ಹೇಳಿದರು.