ಅಲ್ಲದೇ ಇದೇ ಸಂದರ್ಭದಲ್ಲಿ ಅವರು ವಿವಿಧ ಕೇಂದ್ರ ಸಚಿವರ ಭೇಟಿಗಾಗಿ ಸಮಯವನ್ನು ಕೇಳಿದ್ದು, ಸಮಯ ಸಿಕ್ಕರೆ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಪಕ್ಷದ ವರಿಷ್ಠರನ್ನೂ ಭೇಟಿ ಮಾಡಲು ಉದ್ದೇಶಿಸಿದ್ದಾರೆ. ಇದಕ್ಕೆ ಅವಕಾಶ ಸಿಕ್ಕಿದರೆ, ಸಂಪುಟ ಪುನರ್ರಚನೆ ಬಗ್ಗೆಯೂ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬುಧವಾರ ಅವರು ದೆಹಲಿಯಿಂದ ನಗರಕ್ಕೆ ವಾಪಸ್ ಬರಲಿದ್ದಾರೆ.