ಈ ಸಂದರ್ಭದಲ್ಲಿ ಪ್ರವೀಣ್ ಅವರ ಚಿಕ್ಕಪ್ಪ ಜಯರಾಮ ಪೂಜಾರಿ ಅವರು, ‘ನಿಮಗೆ ಬರಲು ಇಂದು ಸಮಯವಾಯಿತಾ. ಇಷ್ಟು ದಿನ ಬಾರದ ನೀವು ಇಂದು ಚೆಂದ ನೋಡಲು ಬಂದಿದ್ದೀರಾ. ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು ನೀವು. ನೀವು ಹಿಂದುತ್ವದ ವಿರುದ್ಧ ಹೇಳಿಕೆ ನೀಡುತ್ತೀರಿ. ಹಿಂದುತ್ವವನ್ನು ನಿರ್ವಂಶ ಮಾಡುವ ಪಕ್ಷ ಕಾಂಗ್ರೆಸ್. ಹಿಂದುತ್ವಕ್ಕೆ ಕಾಂಗ್ರೆಸ್ ಪಕ್ಷ ಎಲ್ಲಿ ಬೆಂಬಲ ನೀಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.