‘ಶುಕ್ರವಾರ ಶಿರಾಕ್ಕೆ ಹೋಗಿ ಬಂದಿರುವುದನ್ನು ಪ್ರಶ್ನಿಸುತ್ತಿದ್ದಾರೆ. ಅನಿವಾರ್ಯವಾಗಿತ್ತು, ಹೋಗಲೇಬೇಕಾಗಿತ್ತು. ಮೊದಲೇ ಚುನಾವಣೆಯ ಉಸ್ತುವಾರಿಯಾಗಿದ್ದೆ. ಸ್ಪರ್ಧಿಸಿರುವ ಅಭ್ಯರ್ಥಿ ಯುವಕ. ಅವರ ಭವಿಷ್ಯದ ಪ್ರಶ್ನೆ ಇದೆ. ಅರ್ಧ ಗಂಟೆಯಾದರೂ ನನ್ನ ಕಾರಣಕ್ಕೆ ಬಂದು, ಹೋಗಿ ಎಂದರು. ಅಸಹಾಯಕನಾಗಿ ಹೋಗಿ ಬಂದಿದ್ದೇನೆ’ ಎಂದು ಉತ್ತರಿಸಿದರು.