ಈ ಕುರಿತಂತೆ ಹೈಕೋರ್ಟ್ ಮೆಟ್ಟಿಲೇರಿದ್ದ ಗುರುಪ್ರಸಾದ್ ಮತ್ತು ನಂದಿನಿ ಅವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ‘ಅರ್ಜಿದಾರರ ಜಮೀನನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಲು 15 ವರ್ಷಗಳ ಕಾಲ ಕಾಯುವಂತೆ ಮಾಡಿದ ಅಧಿಕಾರಿಗಳ ವರ್ತನೆ ಮತ್ತು ಇಷ್ಟು ಸುದೀರ್ಘ ಅವಧಿಯ ತನಕ ಪರಿಹಾರ ಪಾವತಿಯನ್ನು ಏಕೆ ತಡೆಹಿಡಿಯಲಾಗಿದೆ ಎಂಬುದಕ್ಕೆ ಕೆಐಎಡಿಬಿ ವತಿಯಿಂದ ಸಮಂಜಸವಾದ ವಿವರಣೆಯಿಲ್ಲ. ಹೀಗಾಗಿ, ಅರ್ಜಿದಾ
ರರರಿಗೆ ಶೇ 50ರ ದರದಲ್ಲಿ ಪರಿಹಾರವನ್ನು ಮರು ನಿಗದಿಪಡಿಸಬೇಕು. ಪರಿಹಾರ ಮೊತ್ತದ ಮೇಲೆ ವಾರ್ಷಿಕ ಶೇ 12ರ ಬಡ್ಡಿಯನ್ನು ಎಂಟು ವಾರಗಳ ಒಳಗೆ ಪಾವತಿಸಬೇಕು’ ಎಂದು ನಿರ್ದೇಶಿಸಿದೆ.