ಅರ್ಜಿದಾರರ ಪರ ಹಾಜರಾಗಿದ್ದ ವಕೀಲ ಎಸ್.ಎಸ್. ನಾಗಾನಂದ ಅವರು, ‘ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ವಿದ್ಯಾರ್ಥಿಗಳ ಆಯ್ಕೆಗೆ ಅವಕಾಶ ನೀಡಬೇಕಿದೆ’ ಎಂದರು. ‘ಎಲ್ಲಾ ಪದವಿ ಪೂರ್ವ ಕೋರ್ಸ್ಗಳಿಗೆ ಕನ್ನಡ ಕಲಿಕೆಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶವು ಅಂದಾಜು 1,32,300 ವಿದ್ಯಾರ್ಥಿಗಳು ಮತ್ತು 4 ಸಾವಿರ ಶಿಕ್ಷಕರ ಮೇಲೆ ಪರಿಣಾಮ ಬೀರುತ್ತಿದೆ. 600ಕ್ಕೂ ಹೆಚ್ಚು ಸಂಸ್ಕೃತ ಶಿಕ್ಷಕರು, 3 ಸಾವಿರಕ್ಕೂ ಹೆಚ್ಚು ಹಿಂದಿ, 300ಕ್ಕೂ ಹೆಚ್ಚು ಉರ್ದು ಮತ್ತು ಇತರ ಭಾಷೆಯ 100 ಶಿಕ್ಷಕರಿದ್ದಾರೆ’ ಎಂದು ಅರ್ಜಿದಾರರು ವಿವರಿಸಿದ್ದಾರೆ.