ಪಕ್ಷದ ತ್ಯಜಿಸಿದ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದ ಕುರಿತು ಕೇಳಿದ ಪ್ರಶ್ನೆಗೆ, ‘ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಆದರೂ, ಅದರಿಂದ ಅವರಿಗೆ ಈಗಿರುವ ಶಕ್ತಿ ಸಾಲದು ಎನ್ನುವುದು ಗೊತ್ತಾಗುತ್ತದೆ. ಹೀಗಾಗಿ, ಹೊರಗಿನಿಂದ ನಾಯಕರನ್ನು ಕರೆ ತರಬೇಕು ಎನ್ನುವುದು ಶಿವಕುಮಾರ್ ಉದ್ದೇಶ ಇರಬಹುದು’ ಎಂದು ಅವರು ತಿಳಿಸಿದರು.