ಆ ಬೆನ್ನಿಗೆ, ಜೆಡಿಎಸ್ನ ಮರಿತಿಬ್ಬೇಗೌಡ ಅವರು, ‘ಬೂಟಾಟಿಕೆಯ ಸರ್ಕಾರ’ ಎಂದು ಟೀಕಿಸಿದರು. ಆ ಮಾತಿಗೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು. ಈ ವೇಳೆ, ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಸಮರ ನಡೆಯಿತು. ಮಾತಿನ ಮಧ್ಯೆಯೇ ಜೆಡಿಎಸ್ ಸದಸ್ಯರು ಕೂಡಾ ಸದನದಿಂದ ಹೊರನಡೆಸಿದರು.