ಎಂಇಎಸ್ ಮುಖಂಡರಾದ ರೇಣು ಕಿಲ್ಲೇಕರ್, ಸರಿತಾ ಪಾಟೀಲ, ಶಿವಾಜಿ ಸುಂಠಕರ, ರವಿ ಸಾಳುಂಕೆ ಸೇರಿ ಹಲವರು ಮೇಳಾವ್ ಆಯೋಜಿಸಿದ್ದ ವ್ಯಾಕ್ಸಿನ್ ಡಿಪೊ ಆವರಣಕ್ಕೆ ನುಗ್ಗಿದರು.‘ಬೆಳಗಾವಿ, ಖಾನಾಪುರ, ನಿಪ್ಪಾಣಿ, ಬೀದರ್, ಭಾಲ್ಕಿ, ಕಾರವಾರ ಸೇರಿ ಸಂಯುಕ್ತ ಮಹಾರಾಷ್ಟ್ರ ಝಾಲಾಚ್ ಪಾಹಿಜೆ’ ಎಂದು ಘೋಷಣೆಕೂಗಿದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದರು.