ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಏನೇ ರಾಜಕಾರಣ ಮಾಡಲಿ, ಯೋಜನೆ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಬಿಜೆಪಿ ಕೇಂದ್ರ ಸಮಿತಿಯವರು ನೀರಾವರಿ ವಿಚಾರದಲ್ಲಿ ತಮಿಳುನಾಡು– ಗೋವಾ ಬೇಕೋ; ಕರ್ನಾಟಕ ಬೇಕೋ ಎಂಬುದನ್ನು ನಿರ್ಧರಿಸಲಿ. ಈ ವಿಚಾರದಲ್ಲಿ ರಾಜ್ಯದ 26 ಬಿಜೆಪಿ ಸಂಸದರು ಗಮನ ಹರಿಸಬೇಕು ಎಂದರು.