ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಾಗಿದೆ. ಕಾರವಾರದಲ್ಲಿ ತಡರಾತ್ರಿ ಗುಡುಗು ಸಹಿತ ಜೋರಾಗಿ ವರ್ಷಧಾರೆ ಸುರಿಯಿತು. ಶಿರಸಿ, ಹಳಿಯಾಳ, ಭಟ್ಕಳ, ಗೋಕರ್ಣ, ಜೊಯಿಡಾದಲ್ಲೂ ರಾತ್ರಿಯಿಂದ ಬೆಳಗಿನ ತನಕ ಮಳೆಯಾಗಿದೆ. ಶಿರಸಿ ತಾಲ್ಲೂಕಿನಲ್ಲೇ ಸುಮಾರು 500 ಎಕರೆಗಳಷ್ಟು ಭತ್ತದ ಫಸಲಿಗೆ ಹಾನಿಯಾಗಿದೆ. ಕೊಯ್ಲು ಮಾಡಿಟ್ಟಿದ್ದ ಭತ್ತದ ತೆನೆಗಳು ನೀರಿನಲ್ಲಿ ಮುಳುಗಿ ಹಾಳಾಗಿವೆ. ಹಳಿಯಾಳ ತಾಲ್ಲೂಕಿನಲ್ಲಿ ಮೆಕ್ಕೆಜೋಳ ಮಳೆಯಲ್ಲಿ ನೆನೆದಿದೆ.