‘ಇತ್ತೀಚೆಗೆ ಎಚ್.ಡಿ.ಕೋಟೆಯ ಹೊಸಹಳ್ಳಿಯ ಗಿರಿಜನರ ಹಾಡಿಯಲ್ಲಿ ಕಮ್ಮಟ ಏರ್ಪಡಿಸಲಾಗಿತ್ತು. ಜೋಯಿಡಾ, ಕೊಡಗು ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಕಮ್ಮಟ ನಡೆಸುವ ಆಲೋಚನೆ ಇದೆ. ವಿಮರ್ಶಾ ಕಮ್ಮಟದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಈ ಕಮ್ಮಟಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 450ಕ್ಕೂ ಹೆಚ್ಚು ಅರ್ಜಿಗಳೂ ಬಂದಿವೆ. ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ ಇದೇ 22ರಿಂದ 26ರವರೆಗೆ ಕುಪ್ಪಳ್ಳಿಯಲ್ಲಿ ಕಮ್ಮಟ ನಡೆಸಲು ಸಿದ್ಧತೆ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಂಶೋಧನಾ ಕಮ್ಮಟ ನಡೆಸಲಾಗುತ್ತದೆ. ಇದಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.