ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕ, ನೃತ್ಯ ಶಿಕ್ಷಕರ ಸಂಘ ಅಸ್ತಿತ್ವಕ್ಕೆ

Last Updated 16 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ಪ್ರೌಢಶಾಲಾ ನಾಟಕ ಮತ್ತು ನೃತ್ಯ ಶಿಕ್ಷಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಎಂ.ಮಲ್ಲೇಶ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

‘ನಾಟಕ ಮತ್ತು ನೃತ್ಯದ ಮೂಲಕಶಿಕ್ಷಣದ ಗುಣಮಟ್ಟ ಸುಧಾರಿಸುವ, ಧಾರ್ಮಿಕ ಕಟ್ಟುಪಾಡು
ಗಳು, ಮೂಢನಂಬಿಕೆ, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಮಾಜ ಸುಧಾರಕರ ಬಗ್ಗೆ ನಾಟಕ ಮತ್ತು ನೃತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ,ಇಲಾಖೆಯಲ್ಲಿ ಅಲ್ಪ ಸಂಖ್ಯಾತರಾಗಿರುವ ನಾಟಕ ಮತ್ತು ನೃತ್ಯ ಶಿಕ್ಷಣ ಶಿಕ್ಷಕರ ವೇತನ ತಾರತಮ್ಯ, ವರ್ಗಾವಣೆ, ಬಡ್ತಿ, ಕಲಿಕಾ ಸಾಮಗ್ರಿಗಳಿಗೆ ಅನುದಾನದ ಕೊರತೆ, ಹೊಸ ನೇಮಕಾತಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದು ಸಂಘದ ಉದ್ದೇಶ’ ಎಂದು ಪ್ರಕಟಣೆ ತಿಳಿಸಿದೆ.

ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು: ಎಂ.ಮಲ್ಲೇಶ್‌ (ರಾಜ್ಯ ಘಟಕದ ಅಧ್ಯಕ್ಷ), ಶ್ರೀಕಾಂತ್ ಕುಮಟಾ (ಪ್ರಧಾನ ಕಾರ್ಯದರ್ಶಿ), ಕೆ.ವೆಂಕಟೇಶ್ವರ (ಸಂಘಟನಾ ಕಾರ್ಯದರ್ಶಿ), ಎಲ್‌.ಗುರುರಾಜ್‌ (ಖಜಾಂಚಿ), ಬಿ.ಎಸ್‌.ಇಂದು (ಉಪಾಧ್ಯಕ್ಷೆ), ಡಿ.ನಾಗೇಶ ನಾಯ್ಕ (ಸಹ ಕಾರ್ಯದರ್ಶಿ), ಪ್ರಜ್ಞಾ ಹೆಗಡೆ (ಸಹ ಸಂಘಟನಾ ಕಾರ್ಯದರ್ಶಿ).

ನಿರ್ದೇಶಕರು: ಎಸ್‌.ವಿ.ಭಾನುಪ್ರಕಾಶ್‌, ಎನ್‌.ಗೋಪಾಲಕೃಷ್ಣಪ್ಪ, ಕೆ.ಪಿ.ಲೋಕೇಶ್‌, ಬಿ.ಪ್ರವೀಣಕುಮಾರ, ಈಡಿಗರ ವೆಂಕಟೇಶ್‌, ಎನ್‌. ಶೇಖರಪ್ಪ, ಶಿವನಾಯ್ಕ, ರಾಮಣ್ಣ ಮಡಿವಾಳರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT