‘ನಿಗಮದ ನೋಂದಣಿ ಆಗದೇ ಹಣವನ್ನು ಖರ್ಚು ಮಾಡಲು ಬರುವುದಿಲ್ಲ. ನಿಗಮ ಸ್ಥಾಪನೆಗಾಗಿ ಅರ್ಜಿ ಮುಂದೆ ಬಂದಿದೆ. ಆದಷ್ಟು ಬೇಗ ನೋಂದಣಿ ಮುಗಿಸಿ ಹಣವನ್ನು ಖರ್ಚು ಮಾಡಲಿದ್ದೇವೆ’ ಎಂದು ಭರವಸೆ ನೀಡಿದರು. ವಿಷಯ ಪ್ರಸ್ತಾಪಿಸಿದ ಕೃಷ್ಣ ಬೈರೇಗೌಡ, ನಿಗಮ ರಚನೆ ಮಾಡಿ ₹500 ಕೋಟಿ ಅನುದಾನ ನೀಡುವುದಾಗಿ ಸರ್ಕಾರ ಕಳೆದ ವರ್ಷವೇ ಘೋಷಣೆ ಮಾಡಿತ್ತು. ಆದರೆ, ಇಲ್ಲಿಯವರೆಗೆ ಒಂದು ರೂಪಾಯಿ ಕೂಡ ಖರ್ಚು ಮಾಡಿಲ್ಲ. ಸರ್ಕಾರ ಬಡ ಒಕ್ಕಲಿಗರ ಹೆಸರಿನಲ್ಲಿ ಪ್ರಚಾರ ತೆಗೆದುಕೊಂಡಿತು ಎಂದು ಅವರು ತರಾಟೆಗೆ ತೆಗೆದುಕೊಂಡರು.