‘ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ರಚಿಸಿದ್ದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಎರಡೂವರೆ ವರ್ಷ ಕಾಲ ಸುದೀರ್ಘ ಅಧ್ಯಯನ ನಡೆಸಿ ಪಠ್ಯ ಪರಿಷ್ಕರಣೆ ಮಾಡಿತ್ತು. ಆದರೆ, ರೋಹಿತ್ ಚಕ್ರತೀರ್ಥ ಸಮಿತಿ ದಿಢೀರ್ ಹುಟ್ಟಿಕೊಂಡು ಅಷ್ಟೇ ವೇಗದಲ್ಲಿ ಪರಿಷ್ಕರಣೆ ಮಾಡಿ, ವಿಸರ್ಜನೆಯೂ ಆಗಿದೆ. ಈ ವಿಚಾರದಲ್ಲಿ ಚಕ್ರತೀರ್ಥ ತಮ್ಮನ್ನು ತಾವು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಕ್ರೌರ್ಯದ ಪರಮಾವಧಿ. ಯಾವುದೇ ಆಕ್ಷೇಪಾರ್ಹ ಪರಿಷ್ಕರಣೆ ಇಲ್ಲದಿದ್ದರೆ ಪಠ್ಯ ಬಹಿರಂಗಪಡಿಸಲು ಸಮಸ್ಯೆ ಏನು? ರೋಹಿತ್ ಚಕ್ರತೀರ್ಥ ಅವರ ವಿದ್ಯಾರ್ಹತೆ ಏನು? ಬೋಧನಾ ಅನುಭವ ಏನು’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.