ಕೊಪ್ಪಳ: ಸತತ ಬರ, ಬಡತನದಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ದೂರ, ದೂರದ ಊರಿಗೆ ದುಡಿಯಲು ಹೋಗುವ ಜಿಲ್ಲೆಯ ವಲಸೆ ಕಾರ್ಮಿಕರಿಗೆ ಕಷ್ಟ, ಕೋಟಲೆಗಳು ಹೊಸದೇನಲ್ಲ. ಆದರೆ ತಿಂಗಳಾನುಗಟ್ಟಲೆ ಲಾಕ್ಡೌನ್ ಆಗಿದ್ದರಿಂದ ಇದ್ದ ಕೆಲಸ ಬಿಟ್ಟು ಮರಳಿ ಊರಿಗೆ ಬಂದು ಗ್ರಾಮದ ಸೇವೆ ಮಾಡಿ, ಸಾರ್ಥಕತೆ ಕಂಡಿರುವುದು ಅನನ್ಯ.