ದಾರಿಯುದ್ದಕ್ಕೂ ಹೋಗುವವರು, ಬರುವವರು ನೋಡಿಕೊಂಡು ‘ಅಮ್ಮ ಬಂದಳು’ ಎಂದು ಕಣ್ಣೀರು ಸುರಿಸುತ್ತಿ
ದ್ದಳು. ಯುವತಿ ಮಾನಸಿಕವಾಗಿ ನೊಂದಿದ್ದು, ಸಹಜ ಸ್ಥಿತಿಗೆ ಬರುವಂತೆ ಮಾಡಲು ಕೇಂದ್ರದ ಸಿಬ್ಬಂದಿ ಪ್ರಯತ್ನ ಮಾಡುತ್ತಿದ್ದಾರೆ. ಇದರ ಭಾಗವಾಗಿ ಆ ಯುವತಿಗೆ ಬುದ್ಧನ ಜೀವನ, ಸಾಧಕರ ಜೀವನಗಾಥೆಗಳನ್ನು ಹೇಳುತ್ತಿದ್ದಾರೆ. ಸಿಬ್ಬಂದಿ, ಮಹಿಳೆಯರ ಜೊತೆ ಬೆರೆತು ಕೆಲಹೊತ್ತು ಮಾತನಾಡುವ ಯುವತಿ, ಒಬ್ಬಳೇ ಇದ್ದಾಗ ಅಮ್ಮನನ್ನು ನೆನೆದು ಕಣ್ಣೀರು ಸುರಿಸುತ್ತಿದ್ದಾಳೆ.