ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಹೋರಾಟಗಳಿಂದ ಅಂಬೇಡ್ಕರ್‌ ಆತ್ಮಕ್ಕೆ ಶಾಂತಿ: ಈಶ್ವರಪ್ಪ

Last Updated 20 ಫೆಬ್ರುವರಿ 2021, 12:53 IST
ಅಕ್ಷರ ಗಾತ್ರ

ಕಲಬುರ್ಗಿ: ‘ಮೀಸಲಾತಿಗಾಗಿ ವಿವಿಧ ಸಮಾಜದವರು ಹೋರಾಟ ನಡೆಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ನಮ್ಮ ಹಕ್ಕುಗಳನ್ನು ನಾವು ಹೋರಾಟ ಮಾಡಿಯಾದರೂ ಪಡೆಯಬೇಕು ಎಂಬುದು ಡಾ.ಅಂಬೇಡ್ಕರ್‌ ಅವರ ಆಶಯವಾಗಿತ್ತು. ಈಗ ಅವರ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ’ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

‘ಕೇಳಿದ ತಕ್ಷಣಕ್ಕೆ ಮೀಸಲಾತಿ ಕೊಡಲು ಬರುವುದಿಲ್ಲ. ಅದಕ್ಕೆ ಅಧ್ಯಯನ ಮಾಡಿ ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಎಲ್ಲ ಅರ್ಹ ಸಮಾಜದವರಿಗೂ ಅವರ ಹಕ್ಕು ಲಭಿಸಲಿದೆ’ ಎಂದು ಶನಿವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿಪ್ರತಿಕ್ರಿಯಿಸಿದರು.

‘ನಾನು ಹಿಂದುತ್ವ ನಂಬಿಕೊಂಡು ರಾಜಕಾರಣದಲ್ಲಿ ಬೆಳೆದಿದ್ದೇನೆ. ಈಗಲೂ ಅದನ್ನೇ ನಂಬಿ ಮುಂದುವರಿದಿದ್ದೇನೆ. ಆದರೆ, ‘ಅಹಿಂದ’ ನಂಬಿಕೊಂಡು ರಾಜಕಾರಣದಲ್ಲಿ ಮೇಲೆ ಬಂದ ಸಿದ್ದರಾಮಯ್ಯ ಈಗ ‘ಹಿಂದ’ ಎನ್ನುತ್ತಿದ್ದಾರೆ. ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ವರ್ಗಗಳನ್ನೇ ಹಿಂದೆ ತಳ್ಳುತ್ತಿದ್ದಾರೆ’ ಎಂದೂ ಅವರು ಲೇವಡಿ ಮಾಡಿದರು.

‘ತಮ್ಮ ಕಾರ್ಯಕ್ರಮದಲ್ಲಿ ಚೇಲಾಗಳ ಮೂಲಕ ನನಗೆ ಧಿಕ್ಕಾರ ಕೂಗಿಸಿದ್ದಾರೆ. ಇಂಥ ಧಿಕ್ಕಾರಗಳನ್ನು ನನ್ನ ಜೀವನದಲ್ಲಿ ಬಹಳಷ್ಟು ನೋಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT