‘ಪ್ರಾಯೋಗಿಕವಾಗಿ ಮೊದಲು 4–5 ಜಿಲ್ಲೆಗಳಲ್ಲಿ ಆರಂಭಿಸಬೇಕು. ಈ ಜಿಲ್ಲೆಗಳಲ್ಲಿ ದೊರೆಯುವ ಪ್ರತಿಕ್ರಿಯೆ ಆಧರಿಸಿ ರಾಜ್ಯದಾದ್ಯಂತ ವಿಸ್ತರಿಸಬಹುದು. ಟೆಟ್ರಾ ಪ್ಯಾಕ್ನಲ್ಲಿ ಹಾಲು ವಿತರಿಸುವುದರಿಂದ ಹೆಚ್ಚುವರಿ ಕಾರ್ಯಭಾರ ಕಡಿಮೆಯಾಗುತ್ತದೆ. ಮಕ್ಕಳು ಇಚ್ಛಿಸಿದರೆ ಸುಲಭವಾಗಿ ಮನೆಗೆ ಕೊಂಡೊಯ್ದು ಕುಡಿಯಬಹುದು’ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.