‘ಆದರೆ, ವಜಾಗೊಂಡಿರುವ ನೌಕರರನ್ನು ಮರು ನೇಮಕ ಮಾಡಿಕೊಳ್ಳುವಾಗ ಯಾವುದೇ ಷರತ್ತು ವಿಧಿಸಬಾರದು. ವೇತನ ಬಡ್ತಿ ತಡೆಹಿಡಿಯುವುದು, ಪ್ರೊಬೆಷನರಿ ಮತ್ತು ತರಬೇತಿ ಅವಧಿ ಮುಂದೂಡುವುದು ಸೇರಿ ಯಾವುದೇ ಕ್ರಮಗಳನ್ನು ಕೈಗೊಳ್ಳಬಾರದು. ವಜಾಗೊಂಡ ಅವಧಿಯ ವೇತನ ಪಾವತಿಸದಿದ್ದರೂ, ಸೇವಾ ಅವಧಿಯನ್ನು ಪರಿಗಣಿಸಬೇಕು’ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಮನವಿ ಮಾಡಿದರು.