ಕರ್ತವ್ಯಕ್ಕೆ ಹಾಜರಾಗದ ನಾಲ್ವರು ಸಿಬ್ಬಂದಿಯನ್ನು ಸಾರಿಗೆ ಸಂಸ್ಥೆ ಕೇಂದ್ರ ಕಚೇರಿಯಿಂದಲೇ ವರ್ಗಾವಣೆ ಮಾಡಲಾಗಿತ್ತು. ಮಳವಳ್ಳಿ ಡಿಪೊ ವ್ಯವಸ್ಥಾಪಕ ಶಂಕರ್, ಚಾಲಕ ರವಿಶಂಕರ್ಗೆ ಕರೆ ಮಾಡಿ ಕರ್ತವ್ಯಕ್ಕೆ ಹಾಜರಾಗದಿದ್ದರೆ ಅವರನ್ನೂ ವರ್ಗಾವಣೆ ಮಾಡುವುದಾಗಿ ಬೆದರಿಸಿದ್ದರು. ಅಲ್ಲದೆ ರವಿಶಂಕರ್ ಅವರ ಕಳೆದ ತಿಂಗಳ 2 ದಿನದ ವೇತನ ಕಡಿತ ಮಾಡಲಾಗಿತ್ತು. ಇದರಿಂದ ಹೆದರಿದ ಅವರು ಕಳೆನಾಶಕ ಕಾಳು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಸಾರಿಗೆ ಸಂಸ್ಥೆ ಸಿಬ್ಬಂದಿ