ವೇತನಕ್ಕೆ ಅನುದಾನ ಹಂಚಿಕೆ ಮಾಡಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದ್ದು, 8 ಷರತ್ತುಗಳನ್ನು ವಿಧಿಸಿದೆ. ‘ವೇತನ ಹೊರತುಪಡಿಸಿ ಆರ್ಥಿಕ ಸೌಲಭ್ಯ, ಬಾಟಾ ಸೇರಿ ಯಾವುದೇ ಭತ್ಯೆ ಪಾವತಿಸಬಾರದು. ಸಂಸ್ಥೆಯ ಸ್ವಂತ ನಿಧಿಯಡಿ ಯಾವುದೇ ಕಾಮಗಾರಿ ಕೈಗೊಳ್ಳುವಂತಿಲ್ಲ. ಹೊಸದಾಗಿ ಬಸ್ಗಳ ಖರೀದಿ ಮಾಡ ಬಾರದು’ ಎಂದು ತಿಳಿಸಿದೆ.