ಬೆಂಗಳೂರು-ಚಿತ್ರದುರ್ಗ-ವಾಣಿವಿಲಾಸ ಸಾಗರ ಪ್ಯಾಕೇಜ್ ಪ್ರವಾಸದಲ್ಲಿ ಬೆಳಿಗ್ಗೆ 6ಕ್ಕೆ ಬೆಂಗಳೂರಿನಿಂದ ಹೊರಟು ಚಿತ್ರದುರ್ಗದಲ್ಲಿ ಉಪಾಹಾರ ಸೇವನೆ ಬಳಿಕ ಚಿತ್ರದುರ್ಗದ ಕೋಟೆ ವೀಕ್ಷಣೆ, ಚಂದವಳ್ಳಿ ತೋಟ, ವಾಣಿವಿಲಾಸ ಸಾಗರ ಜಲಾಶಯ ವೀಕ್ಷಣೆ ಬಳಿಕ ಅಲ್ಲಿಂದ ಹೊರಟರೆ ರಾತ್ರಿ 9ರ ವೇಳೆಗೆ ಬೆಂಗಳೂರಿಗೆ ಬಸ್ ತಲುಪಲಿದೆ. ಕರ್ನಾಟಕ ಸಾರಿಗೆ, ರಾಜಹಂಸ, ಐರಾವತ ಕ್ಲಬ್ ಕ್ಲಾಸ್ ಬಸ್ಗಳಲ್ಲಿ ಪ್ರವಾಸ ಇರಲಿದ್ದು, ಪ್ರತ್ಯೇಕ ದರ ನಿಗದಿ ಮಾಡಲಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.