ಪ್ರಯಾಣಿಕರ ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆಯಾಗದ ಕಾರಣ ಮೊದಲೇ ಸಂಸ್ಥೆಗಳು ನಷ್ಟದಲ್ಲಿವೆ. 1.30 ಲಕ್ಷ ನೌಕರರಿದ್ದು, ವೇತನ ನೀಡಲಾಗದ ಸ್ಥಿತಿ ಇದೆ. ಕಳೆದ ತಿಂಗಳ ಅರ್ಧದಷ್ಟು ವೇತನ ನೀಡಲಾಗಿದೆ. ಈ ನಡುವೆ ಡೀಸೆಲ್ ದರ ಏರಿಕೆಯಾಗಿರುವ ಕಾರಣ ನಾಲ್ಕೂ ನಿಗಮಗಳಿಗೆ ಪ್ರತಿದಿನ ₹26 ಲಕ್ಷ ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಿ ತೆರಿಗೆ ವಿನಾಯಿತಿ ನೀಡುವಂತೆ ನಾಲ್ಕೂ ನಿಗಮಗಳ ಪರವಾಗಿ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.